ಪಂಜಾಬಿಗಳಿಂದ ದೂರ ...
ಮುಂದಿನ ಹದಿನೈದು ದಿನಗಳನ್ನು ದಿಲ್ಲಿಯ ತಾಪದಿಂದ, ಗುಡುಗುವ ಹರ್ಯಾನ್ವಿಗಳಿಂದ, ಕುಣಿಯುವ ಪಂಜಾಬಿಗಳಿಂದ, ದುರುಗುಟ್ಟುವ ಕಾರು ಡ್ರೈವರುಗಳಿಂದ ದೂರವಾದ, ಪ್ರಶಾಂತವಾದ ಮೈಸೂರಿನಲ್ಲಿ ಕಳೆಯಲಿದ್ದೇನೆ. ಮೇ ತಿಂಗಳ ಕೊನೆಯಲ್ಲಿ ಬರುವ ಮಳೆಯನ್ನು ದಿಲ್ಲಿಯಾಗಲೇ ಕಂಡಿದೆ. ಇನ್ನು ಕುದಿಯಲು ಶುರುವಾದರೆ ಮಾನ್ಸೂನ್ ಬಂದಾಗಲೇ ಸ್ವಲ್ಪ ಮಟ್ಟಿಗೆ ತಣಿಯುವದು. ಹದಿನೈದು ದಿನಗಳಿಗಾದರೂ ಈ ಸೆಕೆಯಿಂದ ಮುಕ್ತಿ ಪಡೆಯುವುದೇ ನನ್ನ ಮುಖ್ಯ ಉದ್ದೇಶ. ಮೈಸೂರಿನಲ್ಲಿ ಬ್ಲಾಗಿಸುವಂತ ಘಟನೆ ನಡೆಯುವದು ಕಷ್ಟವೇ! ಏನಾದರೂ ಸಿಗಬಹುದು, ಸಿಕ್ಕರೆ ವಾಪಸಾದ ಮೇಲೆ ಬ್ಲಾಗಿಸುತ್ತೇನೆ.